ಪೂರ್ಣಿಮಾ ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ಡಾ|| ರಾಜ್ಕುಮಾರ್ ಅರ್ಪಿಸಿ ಶ್ರೀಮತಿ ಪಾರ್ವತಮ್ಮ ರಾಜ್ಕುಮಾರ್ ನಿರ್ಮಿಸುತ್ತಿರುವ ಅದ್ದೂರು ಜಾಕಿ ಚಿತ್ರದ ಚಿತ್ರೀಕರಣವು ಇದೇ ೩೧ ರಿಂದ ಮೇಲುಕೋಟೆಯಲ್ಲಿ ಮುಂದುವರೆಯಲಿದೆ.
ಐದುದಿವಸಗಳ ಕಾಲ ಮೇಲುಕೋಟೇ ಸುತ್ತಮುತ್ತ ಚಿತ್ರೀಕರಣ ನಡೆಯಲಿದ್ದು, ಚಿತ್ರದ ಚಿತ್ರೀಕರಣ ಬಹುತೇಕ ಸಂಪೂರ್ಣಗೊಂಡಂತೆ ಎಂದು ತಿಳಿಸಿರುವ ನಟ ನಿರ್ಮಾಪಕ ರಾಘವೇಂದ್ರ ರಾಜ್ಕುಮಾರ್ ಗೀತೆಗಳ ಚಿತ್ರೀಕರಣ ಮಾತ್ರ ಬಾಕಿ ಉಳಿಯಲಿದೆ ಎಂದು ತಿಳಿಸಿದ್ದಾರೆ.
ಚಿತ್ರಕ್ಕೆ ಯೋಗರಾಜ್ ಆರ್. ಭಟ್ ಮತ್ತು ಜಯಂತ್ ಕಾಯ್ಕಿಣಿ ಸಾಹಿತ್ಯ, ಸತ್ಯ ಹೆಗ್ಡೆ ಛಾಯಾಗ್ರಹಣ, ಹರಿಕೃಷ್ಣ ಸಂಗೀತ, ದೀಪು ಎಸ್. ಕುಮಾರ್ ಸಂಕಲನ, ಶಶಿಧರ ಅಡಪ ಕಲೆ, ಇಮ್ರಾನ್ ನೃತ್ಯ, ರವಿವರ್ಮ ಡಿಫರೆಂಟ್ ಡ್ಯಾನಿ ಸಾಹಸ, ಮಲ್ಲಿಕಾರ್ಜುನ ನಿರ್ಮಾಣ ನಿರ್ವಹಣೆ, ಚನ್ನ ನಿರ್ಮಾಣ ಮೇಲ್ವಿಚಾರಣೆ ಇದ್ದು, ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ ಮತ್ತು ನಿರ್ದೇಶನದ ಹೊಣೆಯನ್ನು ಸೂರಿ ಹೊತ್ತಿದ್ದಾರೆ.
ತಾರಾಗಣದಲ್ಲಿ ಪುನೀತ್ ರಾಜ್ಕುಮಾರ್, ಭಾವನಾ, ಸುಮಿತ್ರ, ರಂಗಾಯಣರಘು, ಹೊನ್ನಾವಳ್ಳಿ ಕೃಷ್ಣ, ರವಿಕಾಳೆ, ಸತ್ಯಜಿತ್, ಶೋಭರಾಜ್, ರಾಜು ತಾಳಿಕೋಟೆ, ಬುಲೆಟ್ ಪ್ರಾಕಾಶ್, ಸಂಪತ್, ಉಮೇಶ್, ರವಿಕಿರಣ್, ಸಿದ್ದರಾಜು, ಹರ್ಷಿಕಾ ಪೊಣಚ್ಚ, ನಿಶಾ, ನಾಯಿಚಂದ್ರು, ಪೆಟ್ರೋಲ್ ಪ್ರಸನ್ನ, ಅಪೂರ್ವ, ಸುಶ್ಮಾ, ಬಿರಾದಾರ್ ಮುಂತಾದವರಿದ್ದಾರೆ.